ಶಾಸನ ಸಾಹಿತ್ಯ

ಶಾಸನ ಸಾಹಿತ್ಯ:

ಶಾಸನಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಷಯ ಸಂಶೋಧನೆ, ಪೂರಕ ಗ್ರಂಥಗಳ ರಚನೆ, ಶಾಸನಗಳ ಪ್ರಕಟನೆಗೆ ಪ್ರೇರಣೆ, ಶಾಸನಕ್ಷೇತ್ರದ ಸಂಶೋಧನೆಗೆ ಮಾಗ೯ದಶ೯ನ- ಎಂಬ ನಾಲ್ಕು ತೆರನಾದ ದುಡಿಮೆ ಡಾ. ಕಲಬುರ್ಗಿಯವರದು. 'ಶಾಸನಗಳಲ್ಲಿ ಶಿವಶರಣರು', ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು' ಹೆಸರಿನ ಕೃತಿಗಳನ್ನಲ್ಲದೆ, ಶಾಸನಗಳನ್ನಾಧರಿಸಿ ನೂರಾರು ವಿಶ್ಲೇಷಣಾತ್ಮಕ- ವ್ಯಾಖ್ಯಾನಾತ್ಮಕ ಸಂಶೋಧನ ಲೇಖನಗಳನ್ನು ಇವರು ಬರೆದಿದ್ದಾರೆ. 'ಧಾರವಾಡ ಜಿಲ್ಲೆಯ ಶಾಸನಸೂಚಿ' ಇತ್ಯಾದಿ ಪೂರಕ ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದಭ೯ದಲ್ಲಿ ಹೊರಬಂದ ಕನಾ೯ಟಕ ಹಾಗೂ, ನೆರೆಯ ರಾಜ್ಯಗಳ ಸುಮಾರು ಹತ್ತರಷ್ಟು ಕನ್ನಡ ಶಾಸನಸಂಪುಟಗಳು ಪ್ರಕಟಗೊಂಡುದು ಒಂದು ಐತಿಹಾಸಿಕ ಘಟನೆಯೆಂದೇ ಹೇಳಬೇಕು. 'ಶಾಸನಗಳಲ್ಲಿ ಕನಾ೯ಟಕದ ಸ್ತ್ರೀಸಮಾಜ' ಇತ್ಯಾದಿ ಪಿಎಚ್.ಡಿ. ಪ್ರಬಂಧಗಳಿಗೂ ಇವರು ಮಾಗ೯ದಶ೯ನ ಮಾಡಿದ್ದಾರೆ. ಶಾಸನ ಕ್ಷೇತ್ರದಲ್ಲಿ ದುಡಿಯಲು ಉತ್ತರ ಕನಾ೯ಟಕದ ಕನ್ನಡ ಪ್ರಾಧ್ಯಾಪಕರು ಮತ್ತು ವಿಧ್ಯಾರ್ಥಿಗಳಲ್ಲಿ ಹೊಸ ಅಭಿರುಚಿಯನ್ನು ಬೆಳೆಸಿದ್ದಾರೆ.
ಸೂ: ಈ ಕೃತಿಗಳ ಹೆಚ್ಚಿನ ವಿವರಗಳಿಗಾಗಿ ಕೃತಿಗಳ ಹೆಸರಿನಮೇಲೆ ಕ್ಲಿಕ್ಕಿಸಿರಿ.

"ಶಾಸನಗಳು ಒಂದು ನಾಡಿನ ಪ್ರಾಚೀನ ಜೀವನ ವ್ಯಾಪಾರದ ದಾಖಲೆಗಳಾಗಿರುತ್ತವೆ ಇವುಗಳ ವಿಷಯ ಸಾಹಿತ್ಯಕೃತಿಗಳಿಗಿಂತ ಹೆಚ್ಚು ವಸ್ತುನಿಷ್ಠವಾಗಿರುತ್ತದೆ. ಈ ಕಾರಣದಿಂದಾಗಿ ಪ್ರಾಚೀನ ಜೀವನವನ್ನು ಪುನರ್ ರಚಿಸಿಕೊಡಲು ಇತ್ತಿಚಿನ ವಿದ್ವಾಂಸರು ಶಾಸನಗಳಿಗೆ ಹೆಚ್ಚು ಮೊರೆಹೋಗುತ್ತಲಿದ್ದಾರೆ."